ಯಾರು ಈ ಕೃಷ್ಣ? - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಏಪ್ರಿಲ್ 23, 2024

ಯಾರು ಈ ಕೃಷ್ಣ?

 

ಕೃಷ್ಣನ ಕುರಿತಾದ ಯಾವುದಾದರೂ ಪುಸ್ತಕವನ್ನು ಓದಿದಾಗ ಅಥವಾ ನೋಡಿದಾಗ ಕೂಡಲೇ ಈ ಕೃಷ್ಣ ಯಾರು? ಹಾಗೂ ಆತನ ಜೊತೆಗಿರುವ ಈ ಹುಡುಗಿ ಯಾರು? ಎಂಬ ಪ್ರಶ್ನೆ ಮೂಡುತ್ತದೆ. 

        ತಕ್ಷಣದ ಉತ್ತರವೆಂದರೆ ಕೃಷ್ಣನು ದೇವೋತ್ತಮ. ಬೇರೆ ಮಾತಿನಲ್ಲಿ ಹೇಳುವುದಾದರೆ ಕೃಷ್ಣನ ಎಲ್ಲ ರೀತಿ ಗಳಲ್ಲಿ ಆಕರ್ಷಕ ಆದುದರಿಂದ ಅವನು ದೇವೋತ್ತಮನು. ಸರ್ವಾಕರ್ಷಣೆಯ ತತ್ವದ ಆಚೆ ದೇವೋತ್ತಮ ಎನ್ನುವುದಕ್ಕೆ ಅರ್ಥವಿಲ್ಲ ಒಬ್ಬ ವ್ಯಕ್ತಿಯು ಬಹಳ ಶ್ರೀಮಂತನಾಗಿದ್ದರೆ, ಬಹು ಐಶ್ವರ್ಯವಂತವನಾಗಿದ್ದರೆ ಅವನು ಜನಸಾಮಾನ್ಯರನ್ನು ಆಕರ್ಷಿಸುತ್ತಾನೆ.  ಹಾಗೆ ಒಬ್ಬ ಮನುಷ್ಯನಿಗೆ ಬಹಳ ಅಧಿಕಾರವಿದ್ದರೆ ಅವನು ಸುಂದರವಾಗಿದ್ದರೆ ಅಥವಾ ವಿವೇಕಶಾಲಿಯಾಗಿದ್ದರೆ ಅಥವಾ ಎಲ್ಲಾ ಸ್ವತ್ತುಗಳ ವಿಷಯದಲ್ಲಿ ನಿರ್ಲಿಪ್ತನಾಗಿದ್ದರೆ ಅವನು ಆಕರ್ಷಿಸುತ್ತಾನೆ. ಆದುದರಿಂದ ವಾಸ್ತವ ಅನುಭವದಿಂದ ಮನುಷ್ಯನ ಆಕರ್ಷಣೆಗೆ ಇವು ಕಾರಣ ಎಂದು ತಿಳಿಯಬಹುದು. ಒಂದು ಶ್ರೀಮಂತಿಕೆ, ಎರಡು ಅಧಿಕಾರ, ಮೂರು ಕೀರ್ತಿ, ನಾಲ್ಕು ಸೌಂದರ್ಯ, ಐದು ವಿವೇಕ ಆರು ತ್ಯಾಗ ಇವುಗಳನ್ನು ಏಕಕಾಲದಲ್ಲಿ ಅಮಿತವಾದ ಪ್ರಮಾಣದಲ್ಲಿ ಪಡೆದಿರುವವನು ದೇವೋತ್ತಮ ಪರಮಪುರುಷ. ಬಹು ದೊಡ್ಡ ವೇದ ಪಾರಂಗತರಾದ  ಪರಶರ ಮುನಿಯ ದೇವುತ್ತಮನ ಆರು ಶ್ರೀಮಂತಿಕೆಗಳನ್ನು ವರ್ಣಿಸಿದ್ದಾರೆ

      ಜಗತ್ತಿನಲ್ಲಿ ಬಹು ಶ್ರೀಮಂತರು , ಬಹು ಅಧಿಕಾರ ಉಳ್ಳವರು ಬಹು ಕೀರ್ತಿವಂತರು ಬಹು ಸುಂದರರು ಬಹು ವಿದ್ವಾಂಸರು,  ಭೌತಿಕ ಸ್ವತ್ತುಗಳಿಗೆ ಆಸೆ ಪಡದ ಸನ್ಯಾಸಿಗಳು ಬಹುಮಂದಿ ಇದ್ದಾರೆ ಆದರೆ ಏಕಕಾಲದಲ್ಲಿ ಮತ್ತು ಮಿತಿ ಇಲ್ಲದ ಪ್ರಮಾಣದಲ್ಲಿ ಮನುಷ್ಯನ ಚರಿತ್ರೆಯಲ್ಲಿ ಕೃಷ್ಣನಂತೆ ಶ್ರೀಮಂತನು ಅಧಿಕಾರ ಉಳ್ಳವನು ಕೀರ್ತಿಶಾಲಿಯು, ಸುಂದರನು, ವಿವೇಕಿಯು ಮತ್ತು ನಿರ್ಲಿಪ್ತನು ಆದ ಒಬ್ಬ ವ್ಯಕ್ತಿಯನ್ನು ಕಾಣಲಾರೆವು. 

   ದೇವೋತ್ತಮ ಪರಮ ಪುರುಷನಾದ ಕೃಷ್ಣನು ಚಾರಿತ್ರಿಕ ವ್ಯಕ್ತಿ ಈ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡವನು ಅವನು ಭೂಮಿಯ ಮೇಲೆ 125 ವರ್ಷಗಳ ಕಾಲ ಇದ್ದನು ಮತ್ತು ಮನುಷ್ಯನಂತೆ ನಡೆದುಕೊಂಡನು ಆದರೆ ಅವನ ಚಟುವಟಿಕೆಗಳು ಅಸದೃಶ್ಯವಾದವು ಅವನು ಕಾಣಿಸಿಕೊಂಡ ಕ್ಷಣದಿಂದ ನಿರ್ಗಮಿಸಿದ ಕ್ಷಣದವರೆಗೂ ಅವನ ಯಾವ ಚಟುವಟಿಕೆಗೂ ಜಗತ್ತಿನ ಚರಿತ್ರೆಯಲ್ಲಿ ಸದಸ್ಯವಿಲ್ಲ ಆದುದರಿಂದ ದೇವೋತ್ತಮ ಎಂದರೆ ನಮ್ಮ ಅರ್ಥವೇನು ಎಂದು ತಿಳಿದ ಯಾರೇ ಆಗಲಿ ಕೃಷ್ಣನು ದೇವತ್ತಮ ಪರಮ ಪುರುಷ ಎಂದು ಒಪ್ಪಿಕೊಳ್ಳುತ್ತಾರೆ

   ದೇವರನ್ನು ಕುರಿತು ಬೇರೆ ಬೇರೆ ರೀತಿಗಳಲ್ಲಿ ಮಾತನಾಡುವ ಬೇರೆ ಬೇರೆ ವರ್ಗದ ಜನರು ಜಗತ್ತಿನಲ್ಲಿ ಇದ್ದಾರೆ ಆದರೆ ವೈದ್ಯಕ ಸಾಹಿತ್ಯದ ಅಭಿಪ್ರಾಯದಲ್ಲಿ ಮತ್ತು ಶಂಕರ ರಾಮಾನುಜ ಮಧ್ವ ವಿಷ್ಣು ಸ್ವಾಮಿ ಚೈತನ್ಯ ಮಹಾಪ್ರಭು ಮೊದಲಾದ ಆಚಾರ್ಯರು ಮತ್ತು ಗುರು ಶಿಷ್ಯ ಪರಂಪರೆಯಲ್ಲಿ ಅವರ ಎಲ್ಲ ಅನುಯಾಯಿಗಳು ಕೃಷ್ಣನು ದೇವೋತ್ತಮ ಪರಮಪುರುಷ ಎಂದು ಒಮ್ಮತದಿಂದ ಒಪ್ಪಿಕೊಳ್ಳುತ್ತಾರೆ. ವೈದ್ಯಕ ಸಂಸ್ಕೃತಿಯ ಅನುಯಾಯಿಗಳಾದ ನಮ್ಮ ಮಟ್ಟಿಗೆ ನಾವು ಇಡೀ ವಿಶ್ವದ ವೈದಿಕ ಇತಿಹಾಸವನ್ನು ಒಪ್ಪಿಕೊಳ್ಳುತ್ತೇವೆ. ವಿಶ್ವದಲ್ಲಿ ಬೇರೆ ಬೇರೆ ಬಗ್ಗೆ ಲೋಕಗಳಿವೆ ಇವಕ್ಕೆ ಸ್ವರ್ಗ ಲೋಕಗಳು ಎಂದು ಹೆಸರು. ಹೀಗೆಂದರೆ ಉನ್ನತ ಲೋಕಗಳ ವ್ಯವಸ್ಥೆ ಮರ್ತ್ಯ ಲೋಕ ಅಥವಾ ಮಧ್ಯದಲ್ಲಿರುವ ದುಃಖ ಮತ್ತು ಪಾತಾಳ ಲೋಕ ಭೂಮಿಯ ಆಧುನಿಕ ಇತಿಹಾಸಕಾರರು 5,000 ವರ್ಷಗಳಿಗೆ ಮೊದಲು ನಡೆದ ಚಾರಿತ್ರಿಕ ಘಟನೆಗಳ ಸಾಕ್ಷವನ್ನು ಕೊಡಲಾರರು. 40,000 ವರ್ಷಗಳ ಹಿಂದೆ ಹೋಮೋ ಸೇಪಿಯನ್ನರು ಎಂದರೆ ಯೋಚಿಸುವ ಶಕ್ತಿ ಇದ್ದ ಮನುಷ್ಯರು ಈ ಗ್ರಹದಲ್ಲಿ ಕಾಣಿಸಿಕೊಂಡಿರಲಿಲ್ಲ ಏಕೆಂದರೆ ವಿಕಾಸವು ಆ ಬಿಂದುವನ್ನು ಮುಟ್ಟಿರಲಿಲ್ಲ ಎಂದು ಮಾನವ ವಿಜ್ಞಾನಿಗಳು ಹೇಳುತ್ತಾರೆ ಆದರೆ ವೈಯಕ್ತಿಕ ಇತಿಹಾಸಗಳಾದ ಪುರಾಣಗಳು ಮತ್ತು ಮಹಾಭಾರತವೂ ಕೋಟ್ಯಂತರ ವರ್ಷಗಳ ಹಿಂದೆ ನಡೆದ ಮಾನವ ಚರಿತ್ರೆಗಳನ್ನು ಬಿತ್ತರಿಸುತ್ತದೆ 

        ಉದಾಹರಣೆಗೆ ಇತಿಹಾಸಗಳಿಂದ ಕೋಟ್ಯಾಂತರ ವರ್ಷಗಳ ಹಿಂದೆ ಕೃಷ್ಣನು ಕಾಣಿಸಿಕೊಂಡು ಮರೆಯಾದ ಚರಿತ್ರೆಯು ದೊರೆಯುತ್ತದೆ ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ತಾನು ಮತ್ತು ಅರ್ಜುನ ಇಬ್ಬರು ಆಗಲೇ ಹಲವು ಜನ್ಮಗಳನ್ನು ಎತ್ತಿದ್ದೇವೆ ಎಂದು ಹಾಗೂ ಅವುಗಳು ತನಗೆ ತಿಳಿದಿವೆ ಎಂದು ಆದರೆ ಅರ್ಜುನನಿಗೆ ಅವು ನೆನಪಿಲ್ಲವೆಂದು ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ ಕೃಷ್ಣನ ತಿಳುವಳಿಕೆಗೂ ಅರ್ಜುನನ ತಿಳುವಳಿಕೆಗೂ ಇರುವ ವ್ಯತ್ಯಾಸವನ್ನು ಇದು ತೋರಿಸುತ್ತದೆ.  ಅರ್ಜುನ ಒಬ್ಬ ಶ್ರೇಷ್ಠ ಯುದ್ಧ ಕುರುವಂಷದ ಸುಸಂಸ್ಕೃತ ಸದಸ್ಯ , ಆದರೆ ಏನೇ ಆಗಲಿ ಅವನು ಸಾಮಾನ್ಯ ಮನುಷ್ಯನು. ದೇವೋತ್ತಮ ಪರಮಪುರುಷನಾದ ಕೃಷ್ಣನ ತಿಳುವಳಿಕೆಗೆ ಮಿತಿ ಇಲ್ಲ ಅವನಿಗೆ ಮಿತಿ ಇಲ್ಲದ ತಿಳುವಳಿಕೆ ಇರುವುದರಿಂದ ಅವನ ಸ್ಮರಣ ಶಕ್ತಿಗೂ ಮಿತಿ ಇಲ್ಲ. 

       ಕೃಷ್ಣನು ಸರ್ವಾಕರ್ಷಕನಾದದ್ದರಿಂದ ಮನುಷ್ಯನು ತನ್ನ ಎಲ್ಲಾ ಬಯಕೆಗಳನ್ನು ಅವನಲ್ಲಿ ಕೇಂದ್ರೀಕರಿಸಬೇಕೆಂದು ತಿಳಿದುಕೊಳ್ಳಬೇಕು. ಒಂದು ದೇಹಕ್ಕೆ ಒಬ್ಬ ವ್ಯಕ್ತಿಯು ಯಜಮಾನ ಆದರೆ ಪ್ರತಿಯೊಬ್ಬರ ಹೃದಯದಲ್ಲಿ ಪರಮಾತ್ಮನಾಗಿ ಇರುವ ಕೃಷ್ಣನು ಪ್ರತಿಯೊಂದು ದೇಹದ ಒಡೆಯ ಮತ್ತು ಪರಮ ಪ್ರಭು ಹೀಗಿರುವುದರಿಂದ ನಮ್ಮ ಒಲವಿನ ಪ್ರವೃತ್ತಿಗಳನ್ನು ಕೃಷ್ಣನಲ್ಲಿ ಮಾತ್ರ ಕೇಂದ್ರೀಕರಿಸಿದರೆ ಕೂಡಲೇ ವಿಶ್ವಪ್ರಿಯ ಏಕತೆ ಮತ್ತು ಮನಶ್ಯಾಂತಿಗಳ ಸಾಕ್ಷಾತ್ಕಾರವಾಗುತ್ತದೆ ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕಾರ್ಯಗಳು ಒಳ್ಳೆಯದಾಗಿರಬೇಕು ಆಗ ಮಾತ್ರ ದೇವರು ನಮ್ಮ ಅಂತರದಲ್ಲಿ ವಾಸಿಸುವವರು ಎಂದು ಆಶಿಸುವ ನಿಮ್ಮೊಳಗೊಬ್ಬ... 

 - ಕಾರ್ತಿಕ್ ಹಳಿಜೋಳ

ಪತ್ರಿಕೋದ್ಯಮ ವಿಭಾಗ

ಎಂ ಎಂ ಕಲಾ ಮತ್ತು ವಿಜ್ಞಾನ ವಿದ್ಯಾಲಯ ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ